Sunday, October 23, 2016

ಶೀತಕ್ಕೆ(ನೆಗಡಿಗೆ) ಮದ್ದು :

Image result for cold disease pictures

ಈ ಋತುವಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗವೆಂದರೆ ಶೀತ ಅಥವಾ ನೆಗಡಿ. ಚಳಿಗಾಲದಲ್ಲಿ ಅನೇಕರು ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯ ರೋಗ ನೆಗಡಿ ಎಂದು ನಿರ್ಲಕ್ಷ್ಯಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು. ಮಾರುಕಟ್ಟೆಯಲ್ಲಿ ನೆಗಡಿ ನಿಯಂತ್ರಣಕ್ಕೆ ಅನೇಕ ಔಷಧಿಗಳು ಬಂದಿವೆ. ಅವು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರಬಹುದು. ಅದರ ಬದಲು ಮನೆಯಲ್ಲಿಯೇ ಕೆಲವೊಂದು ಉಪಚಾರ ಮಾಡಿಕೊಂಡರೆ ಶೀತ ಮಾಯವಾಗುತ್ತದೆ. ಹಾಗಾಗಿ ಈ ಕೆಳಗೆ ತಿಳಿಸಿರುವ ಮನೆಮದ್ದುಗಳು ಬಹಳಷ್ಟು ಉಪಯೋಗಕರ. 

ಶುಂಠಿ :


ಶುಂಠಿಯ ಬೇರಿನಲ್ಲಿ ಹೊಂದಿರುವ ಆರೋಗ್ಯ ಪ್ರಯೋಜನಗಳು ಶತಮಾನಗಳಿಂದ ಹೆಸರು ವಾಸಿಯಾಗಿವೆ, ಆದರೆ ಈಗ ನಾವು ಅದರ ಗುಣಪಡಿಸುವ ಗುಣಗಳನ್ನು ವೈಜ್ಞಾನಿಕ ಪುರಾವೆಗಳೆಂದು ನಂಬಬಹುದು. ಕುದಿಯುವ ನೀರಿನಲ್ಲಿ ಹಸಿ ಶುಂಠಿ ಬೇರಿನ ಕೆಲವು ಚೂರುಗಳು ಕೆಮ್ಮು ಅಥವಾ ಒಂದು ನೋಯುತ್ತಿರುವ ಗಂಟಲು ಶಮನಗೊಳಿಸಲು ಸಹಾಯ ಮಾಡಬಹುದು. ಇದು ಆಗಾಗ ಬರುವ ವಾಕರಿಕೆ ಭಾವನೆ ಓಡಿಸುವ ಔಷಧವನ್ನು ಸೂಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಶುಂಠಿ ಟೀ ಮಾಡಿ ಸೇವಿಸಿದರೆ ನೆಗಡಿ ಮಾಯವಾಗುತ್ತದೆ. ಇದನ್ನು ತಯಾರಿಸಲು ಒಂದು ಪಾತ್ರೆಯಲ್ಲಿ ನೀರಿಗೆ ಆರರಿಂದ ಎಂಟು ಶುಂಠಿಯ ಬೇರುಗಳನ್ನು ಹಾಕಿ ಅದಕ್ಕೆ ಚೂರು ಚಕ್ಕೆ, ನಿಂಬೆ ರಸ, ಜೇನುತುಪ್ಪ ಸೇರಿಸಿ ಅದರ ಅರ್ಧದಷ್ಟು ಆಗುವವರೆಗೆ ಚೆನ್ನಾಗಿ ಕುಡಿಸಿ.  ನಂತರ ಆರಿಸಿ ಸೇವಿಸಿ. ಹೀಗೆ  ಮಾಡುವುದರಿಂದ  ನೆಗಡಿಯನ್ನು  ಹೋಗಲಾಡಿಸಬಹುದು. 

ಬೆಳ್ಳುಳ್ಳಿ :


ಬೆಳ್ಳುಳ್ಳಿ ಆಂಟಿಮೈಕ್ರೊಬೈಯಲ್ ಇದು ಸಂಯುಕ್ತ allicin ಹೊಂದಿರುತ್ತದೆ. ನಿಮ್ಮ ಆಹಾರದಲ್ಲಿ ಒಂದು ಬೆಳ್ಳುಳ್ಳಿ ಪೂರಕವಾಗಿ  ಶೀತ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ
ಈ ಮಧ್ಯೆ, ನಿಮ್ಮ ಆಹಾರದಲ್ಲಿ ಹೆಚ್ಚು ಬೆಳ್ಳುಳ್ಳಿ ಸೇರಿಸುವುದು ಬಹುಶಃ ಘಾಸಿಗೊಳಿಸುವುದಿಲ್ಲ.  ಒಂದು ಎಸಳು ಜಜ್ಜಿದ ಬೆಳ್ಳುಳ್ಳಿ ಅದಕ್ಕೆ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ನೆಗಡಿ ದೂರವಾಗುತ್ತದೆ. 

ಓಂ ಕಾಳು :
Image result for om kalu pictures

ಶೀತದ ಕಾರಣ ನಿಮ್ಮ ತಲೆ ಭಾರ ಎನಿಸಿದರೆ ಓಂ ಕಾಳುಗಳನ್ನು ಬಿಸಿ ಮಾಡಿ.  ನಂತರ ಅದನ್ನು ಕೈನಲ್ಲಿ ಇಟ್ಟುಕೊಂಡು, ರಬ್ ಮಾಡಿ ವಾಸನೆಯನ್ನು ಪದೇ ಪದೇ ತೆಗೆದುಕೊಳ್ಳಿ. ಶೀತದ ಕಾರಣ ನಿಮಗೆ ಜ್ವರ ಬರುವ ಲಕ್ಷಣ ಕಂಡು ಬಂದಲ್ಲಿ ಓಂಕಾಳು ಬೀಜವನ್ನು ಎರಡು ಕಪ್ ನೀರಿನೊಂದಿಗೆ ಕುದಿಸಿ. ಅದು ಒಂದು ಕಪ್ ಆಗುವವರೆಗೆ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಆಗಾಗ ಸೇವಿಸುತ್ತಿರಿ. ತುಳಸಿ ಹಾಗೂ ಓಂ ಕಾಳುಗಳನ್ನು ಸೇರಿಸಿ ಕಷಾಯ ಮಾಡಿಕೊಂಡು ಆಗಾಗ ಕುಡಿಯುತ್ತಿರಿ. ಇದರಿಂದ ನೆಗಡಿ ಕಡಿಮೆಯಾಗುವುದಲ್ಲದೇ,  ಸೋಂಕು ಕೂಡ ದೂರವಾಗುತ್ತದೆ. 

ಜೇನುತುಪ್ಪ :
Image result for honey

ಜೇನುತುಪ್ಪವು ಶಿಶುಗಳು ಮತ್ತು ರೋಗಿಗಳಿಗೆ ಉತ್ತಮ ಪೌಷ್ಟಿಕ ಆಹಾರವಾಗಿದೆ. ಹಾಗಾಗಿ ಜೇನುತುಪ್ಪದಲ್ಲಿ ಸಾಕಷ್ಟು ಉಪಯೋಗಕಾರಿ ಗುಣಗಳಿವೆ. ಜೇನುತುಪ್ಪವು ಒಂದು ಆಂಟಿಸೆಪ್ಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ದಾಲ್ಚಿನಿ ಮತ್ತು ಜಾಯಿಕಾಯಿ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ, ಸಂಜೆ ಹಾಗೂ ಬೆಳಿಗ್ಗೆ ಕುಡಿಯುತ್ತ ಬಂದರೆ ಪ್ರಯೋಜನಕಾರಿ. ಒಂದು ಚಮಚ ಜೇನು ತುಪ್ಪಕ್ಕೆ,ಅರ್ಧ ಚಮಚ ಈರುಳ್ಳಿ ರಸವನ್ನು ಬೆರೆಸಿ ಕುಡಿಯುವುದರಿಂದ ಶೀತ ಮಾಯವಾಗುತ್ತದೆ.

ನೀರಿನ ಹಬೆ (ಸ್ಟೀಮ್):
Image result for taking steam

ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಪ್ಲಾಂಟ್ ಆಯಿಲ್ ಅಥವಾ ನೀಲಗಿರಿ ಎಣ್ಣೆ ಅಥವಾ ವಿಕ್ಸ್ ನ್ನು ಹಾಕಿ ಹಬೆಯನ್ನು ಮುಖವು ಬೆವರಿಳಿಯುವಂತೆ ತೆಗೆದುಕೊಂಡರೆ ಕಟ್ಟಿದ ಮೂಗು ಹಾಗೂ ಶೀತವು ಬೇಗನೆ ನಿವಾರಣೆ ಆಗುತ್ತದೆ.

No comments:

Post a Comment