ಕೆಲವಡೆ ಜೋರಾದ ಮಳೆ, ಮತ್ತೆ ಕೆಲವಡೆ ಮೋಡ ಮುಸುಕಿದ ವಾತಾವರಣ. ಇದರಿಂದಾಗಿ ಕೆಮ್ಮು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಸುಲಭವಾಗಿ ಮನೆಯವರಿಗೆಲ್ಲಾ ಶೀತ, ಕೆಮ್ಮು ತಲೆನೋವಿನ ಸಮಸ್ಯೆ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕೆಳಗೆ ತಿಳಿಸಿರುವ ಮನೆಮದ್ದುಗಳನ್ನು ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನೀರು ಹಾಗೂ ಉಪ್ಪು :
ಬಿಸಿನೀರಿನಲ್ಲಿ ಉಪ್ಪನ್ನು ಕರಗಿಸಿ ಬಾಯನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಮುಕ್ಕಳಿಸುವುದರಿಂದ ಕಫ ಇರುವ ಕೆಮ್ಮನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಇದು ಬಹಳ ಉಪಯೋಗಕಾರಿಯಾಗಿದೆ.
ಕಲ್ಲುಸಕ್ಕರೆ ತಿನ್ನಿರಿ:
ದಿನನಿತ್ಯ ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತಿರುವುದರಿಂದ ಕೂಡ ಕಫ ಇರುವ ಕೆಮ್ಮನ್ನು ಹೋಗಲಾಡಿಸಬಹುದು.
ತುಳಸಿ :
ತುಳಸಿ ಎಲೆಯನ್ನು ಆಗ್ಗಾಗ್ಗೆ ಬಾಯಲ್ಲಿಟ್ಟುಕೊಂಡು ಜಗಿಯುವುದರಿಂದ ಕೆಮ್ಮಣ್ಣು ಆದಷ್ಟು ಬೇಗನೆ ಓಡಿಸಬಹುದಾಗಿದೆ. ಇದು ಶೀತವನ್ನು ಕೂಡ ಹೋಗಲಾಡಿಸುವ ಗುಣವನ್ನು ಹೊಂದಿದೆ.
ದೊಡ್ಡ ಪತ್ರೆ :

ಒಂದು ಪಾತ್ರೆಯಲ್ಲಿ ನೀರು, ದೊಡ್ಡಪತ್ರೆ, ಶುಂಠಿ, ಅಜ್ವಾನ ಹಾಗೂ ಕಾಳುಮೆಣಸನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಕಫ ಸಹಿತ ಕೆಮ್ಮನ್ನು ವಾಸಿ ಮಾಡಬಹುದಾಗಿದೆ.
ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು :
ಒಂದು ಪಾತ್ರೆಗೆ ನೀರು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಇದೆಲ್ಲವನ್ನು ಜಜ್ಜಿ ಹಾಕಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಕುದಿಸಿದ ಕಷಾಯವನ್ನು ಕುಡಿಯುವುದರಿಂದ ಕಫಸಹಿತ ಕೆಮ್ಮನ್ನು ಮಾಯವಾಗಿಸಬಹುದು. ಅಲ್ಲದೆ ಹೀಗೆ ತಯಾರಿಸಿದ ಕಷಾಯದಿಂದ ಹಬೆಯನ್ನು ತೆಗೆದುಕೊಂಡರೆ ಶೀತ ಹಾಗೂ ಗಂಟಲು ನೋವನ್ನು ಕೂಡ ಆದಷ್ಟು ಬೇಗನೆ ಹೋಗಲಾಡಿಸಬಹುದಾಗಿದೆ.
ಈರುಳ್ಳಿ :
ಹಸಿ ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಅದನ್ನು ನೆನೆಯಲು ಬಿಟ್ಟು ಸೇವಿಸುವುದರಿಂದ ಕೆಮ್ಮನ್ನು ವಾಸಿ ಮಾಡಬಹುದಾಗಿದೆ.
ಅರಿಶಿನ :
ಒಂದು ಸ್ಪೂನ್ ಅರಿಶಿನಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.
ಅರಿಶಿನವು ಆಂಟಿಸೆಪ್ಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅರಶಿನವನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು.
ನಿಂಬೆ :
ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ನಿಂಬೆ ರಸ ಹಾಗೂ ಒಂದು ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಶ್ರ ಮಾಡಿ ಸೇವಿಸುವುದರಿಂದ ಕೆಮ್ಮು ಬಹುಬೇಗನೆ ಮಾಯವಾಗುತ್ತದೆ.
No comments:
Post a Comment